Sunday, April 2, 2017

ಯುಗಾದಿ ಉತ್ಸವ

ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಬಿಗ್ ಬಾಸ್ ಖ್ಯಾತಿಯ ಕೀರ್ತಿ ಕುಮಾರ್ ರವರು ಆಗಮಿಸಿದ್ದರು






ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೀರ್ತಿ ಕುಮಾರ್ ರವರು ಕನ್ನಡ ಭಾಷೆಯು ನಗರ ಪ್ರದೇಶಗಳಲ್ಲಿ ಕಡಿಮೆಯಾಗುತ್ತಿರುವುದರ ಕಾರಣಗಳು ಹಾಗು ಇಂದಿನ ಯುವ ಜನೆತೆಗೆ ಕನ್ನಡದ ಮಹತ್ವವೇನು ಎಂಬುದರ ಬಗ್ಗೆ ತಮ್ಮದೇ ಶೈಲಿಯಲ್ಲಿ ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕನ್ನಡವನ್ನು ಉಳಿಸಿ ಬೆಳೆಸುವುದಕ್ಕಿಂತ ಮುಂಚೆ ಅದನ್ನು ಬಳಸುವಂತೆ ಸಲಹೆ ನೀಡಿದರು


ಕೀರ್ತಿಯವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು


ಕಾರ್ಯಕ್ರದಲ್ಲಿ ಡಾ II ದೇವಿದಾಸ್ ನಾಯಕ್, ಡಾ II ವೀರಪ್ಪ ಗೌಡ, ಪ್ರೊ ಯಶವಂತಿ ಎಸ್ ಸಾಲಿಯಾನ, ಡಾ II ಕೆ ಪಿ ಪ್ರಕಾಶ್ ಹಾಗು ಏ ಜಿ ಪ್ರಶಾಂತ್ ರವರು  ಪಾಲ್ಗೊಂಡಿದ್ದರು

Saturday, March 25, 2017

ಪರಿಸರ ಜಾಗೃತಿ

ದಿನಾಂಕ 23-03-2017 ರಂದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಶೃಂಗೇರಿಯ ರೋಟರಿ ಕ್ಲಬ್ ವತಿಯಿಂದ ವಿದ್ಯಾರಣ್ಯಪುರ ಗ್ರಾಮದ ಎಲ್ಲಾ ಮನೆಗಳಿಗೂ ಒಂದೊಂದು ಕೈಚೀಲ ಹಾಗೂ ಒಂದು ಗಿಡವನ್ನು ವಿತರಿಸಲಾಯಿತು.

500 ರಕ್ಕೂ ಹೆಚ್ಚಿನ ಮನೆಗಳಿಗ ಗಿಡಗಳನ್ನೂ ಕೈಚೀಲವನ್ನೂ ವಿತರಿಸಿ ಪ್ಲಾಸ್ಟಿಕ್ ಮುಕ್ತ ಪರಿಸರ ಮಾಡಬೇಕಾಗಿ ಜಾಗೃತಿ ಮೂಡಿಸಲಾಯಿತು


 ಪರಿಸರ ಜಾಗೃತಿಯನ್ನು ಜನರಲ್ಲಿ ಮೂಡಿಸುವ ಸಲುವಾಗಿ ಕಾಲೇಜು ಹಾಗು ರೋಟರಿ ವತಿಯಿಂದ  ನಡೆದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅತ್ಯಂತ ಮೆಚ್ಚುಗೆ ವ್ಯಕ್ತವಾಯಿತು

ಪೋಷಕರು - ಅಧ್ಯಾಪಕರುಗಳ ಸಭೆ

ದಿನಾಂಕ 24-03-2017 ರಂದು ಕಾಲೇಜಿನಲ್ಲಿ IQSC ವತಿಯಿಂದ ಪೋಷಕರು- ಅಧ್ಯಾಪಕರುಗಳ ಸಭೆಯನ್ನು ಏರ್ಪಡಿಸಲಾಗಿತ್ತು

ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರುಗಳು, ಆಡಳಿತ ಮಂಡಳಿಯ ಸದಸ್ಯರುಗಳು ಹಾಗು ವಿಧ್ಯಾರ್ಥಿಗಳ ಪೋಷಕರುಗಳು ಭಾಗವಹಿಸಿದ್ದರು


ವಿಧ್ಯಾರ್ಥಿಗಳ ಹಾಜರಾತಿ, ಶೈಕ್ಷಣಿಕ ಪ್ರಗತಿಗಳ ಬಗ್ಗೆ ಪೋಷಕರುಗಳೊಂದಿಗೆ ಅಧ್ಯಾಪಕರುಗಳು ಹಾಗು ಆಡಳಿತ ಮಂಡಳಿಯ ಸದಸ್ಯರುಗಳು ಮುಕ್ತವಾಗಿ ಚರ್ಚಿಸಿದರು. ಪೋಷಕರುಗಳು ಕೂಡಾ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು




ವಿಜ್ಞಾನ ಉತ್ಸವ 2017

ದಿನಾಂಕ 11-03-2017 ರಂದು ಕಾಲೇಜಿನಲ್ಲಿ ವಿಜ್ಞಾನ ಸಂಘದಿಂದ ವಿಜ್ಞಾನ ಉತ್ಸವ 2017 ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಡಾ II ಬಿ.ಎನ್. ಸುರೇಶ್ , ಅಧ್ಯಕ್ಷರು, ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ (INAE) ಮತ್ತು ವಿಜ್ಞಾನಿಗಳು,ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)  ಇವರು ಆಗಮಿಸಿದ್ದರು



ಕಾರ್ಯಕ್ರಮದಲ್ಲಿ ಮಾತನಾಡಿದ ಡಾ II ಬಿ.ಎನ್. ಸುರೇಶ್ ರವರು ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತೀಯರ ಸಾಧನೆ, ಹಾಳಾಗುತ್ತಿರುವ ಪರಿಸರ, ಇಂದಿನ ಯುಗದಲ್ಲಿ  ಉಪಗ್ರಹಗಳ ಅವಶ್ಯಕತೆ, ಅವುಗಳ ಮಾಹಿತಿಯ ಯಶಸ್ವೀ ಬಳಕೆಯ ಕುರಿತಾಗಿ ಸವಿಸ್ತಾರವಾಗಿ ವಿವರಿಸಿದರು


ಮಧ್ಯಾನ್ಹ ನಡೆದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರವನ್ನು ಪ್ರಾಣಿ ಶಾಸ್ತ್ರ ಉಪನ್ಯಾಸಕರಾದ ಕೇಶವ ಮೂರ್ತಿಯವರು ನಡೆಸಿಕೊಟ್ಟರು


ಈ ವಿಜ್ಞಾನ ಉತ್ಸವ ಕಾರ್ಯಕ್ರದಲ್ಲಿ ಡಾII ಕಲಾಂ ನುಡಿಚಿತ್ರ ನಮನ ಎಂಬ ವಿಶ್ಶಿಷ್ಟ ನುಡಿಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಇದರ ಜೊತೆಗೆ ಅರುನಾಚಲ್ ಹೆಬ್ಬಾರ್  ರವರಿಂದ  ಜೀವ ವೈವಿಧ್ಯತೆ ಛಾಯಾ ಚಿತ್ರ ಪ್ರದರ್ಶನವನ್ನುಕೂಡಾ ಏರ್ಪಡಿಸಲಾಗಿತ್ತು.  ವಿಜ್ಞಾನ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶ್ರೀನಿವಾಸ್ ಮೂರ್ತಿ, ಪ್ರಗತಿಪರ ಕೃಷಿಕರು,ಶೃಂಗೇರಿ ಇವರು ಭಾಗವಹಿಸಿದ್ದರು



ಸಂಜೆ ಜೀವ ವಿಸ್ಮಯ ಎಂಬ ಕಾರ್ಯಕ್ರಮದಲ್ಲಿ  ಸಾಕ್ಷ್ಯಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು,ಸಸ್ಯಶಾಸ್ತ್ರ ಉಪನ್ಯಾಸಕರಾದ ರಾಘವೇಂದ್ರರವರು ಇದನ್ನು ನಡೆಸಿಕೊಟ್ಟರು 

ಇದೇ ದಿನ ರಾತ್ರಿ ತೀರ್ಥಹಳ್ಳಿ ಕಾಲೇಜಿನ  ಉಪನ್ಯಾಸಕರಾದ ಸೋಮಯಾಜಿಯವರಿಂದ ಖಗೋಳ ವೀಕ್ಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು 

ವೈವಿಧ್ಯಮಯ ಕಾರ್ಯಕ್ರಮಗಳನ್ನು ಒಳಗೊಂಡ ವಿಜ್ಞಾನ ಉತ್ಸವ 2017 ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿತು




ಇನ್ಫೋಸಿಸ್ ಕ್ಯಾಂಪಸ್ ಆಯ್ಕೆ

ದಿನಾಂಕ 10-03-2017 ರಂದು ಕಾಲೇಜಿನ ಪ್ಲೇಸ್ ಮೆಂಟ್ ಸೆಲ್ ವತಿಯಿಂದ ಕ್ಯಾಂಪಸ್ ಆಯ್ಕೆ ಕಾರ್ಯಕ್ರಮ ನಡೆಯಿತು

ಪ್ರತಿಷ್ಟಿತ ಇನ್ಫೋಸಿಸ್ ಸಂಸ್ಥೆಯು ವಿಧ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು.ಶೃಂಗೇರಿ ಸುತ್ತ ಮುತ್ತಲ ಹಲವಾರು ಕಾಲೇಜಿನ ವಿಧ್ಯಾರ್ಥಿಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು

ಬೆಳೆಗ್ಗೆಯಿಂದ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 30 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಹಲವು ಸುತ್ತುಗಳಲ್ಲಿ ಆಯ್ಕೆಯಾಗಿ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು



Sunday, March 5, 2017

ಶೃಂಗ ಸಂಭ್ರಮ

ದಿನಾಂಕ 4-03-2017 ರಂದು ಕಾಲೇಜಿನಲ್ಲಿ ಅಂತರ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆ  'ಶೃಂಗ ಸಂಭ್ರಮ ' ವನ್ನುಏರ್ಪಡಿಸಲಾಗಿತ್ತು

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶೃಂಗೇರಿಯ ವರ್ತಕರಾದ ನಾಗೇಶ್ ಕಾಮತ್ ರವರು ಆಗಮಿಸಿದ್ದರು. ಸಾಂಸ್ಕೃತಿಕ ಕಲೆಗಳಿಗೆ  ಪ್ರೋತ್ಸಾಹ ನೀಡುವುದರಲ್ಲಿ ಜೆ ಸಿ ಬಿ ಎಂ ಎಂದಿಗೂ ಮುಂಚೂಣಿಯಲ್ಲಿದೆ ಎಂದು ತಮ್ಮ ಭಾಷಣದಲ್ಲಿ ಅನಿಸಿಕೆ ವ್ಯಕ್ತ ಪಡಿಸಿದರು

ಈ ಕಾರ್ಯಕ್ರಮಕ್ಕೆ ವಿವಿದೆಡೆಯಿಂದ 8 ಕಾಲೇಜಿನ ತಂಡಗಳು ಭಾಗವಹಿಸಿದ್ದವು, ಒಂದೊಂದು ತಂಡಕ್ಕೂ ಅರ್ಧ ಘಂಟೆಯ ಕಾಲಾವಕಾಶವನ್ನು ನೀಡಲಾಗಿತ್ತು, ಈ ಅರ್ಧ ಘಂಟೆಯ ಅವದಿಯಲ್ಲಿ ತಂಡಗಳು  ನಿರೂಪಣೆ , ಭಾರತ ನಾಟ್ಯ, ಏಕವ್ಯಕ್ತಿ ನೃತ್ಯ, ಸಮೂಹ ನೃತ್ಯ, ಪ್ರಹಸನ, ಭಾವಗೀತೆಗಳನ್ನು ಪ್ರಸ್ತುತ ಪಡಿಸಿದವು

ವಿಧ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಅದ್ಭುತವಾಗಿ ಪ್ರಸ್ತುತ ಪಡಿಸಿದರು

ತೀರ್ಥಹಳ್ಳಿಯ ತುಂಗಾ ಮಹಾವಿಧ್ಯಾಲಯದ ವಿಧ್ಯಾರ್ಥಿಗಳು ಶೃಂಗ ಸಂಭ್ರಮ-2017 ರ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು






































ಯುಗಾದಿ ಉತ್ಸವ

ದಿನಾಂಕ 28-03-2017 ರಂದು ಕಾಲೇಜಿನ ಕಲಾ ವಿಭಾಗ ಹಾಗು ಅರ್ಥ ಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಯುಗಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು ...